Samudyatha Event Management

Samudyatha Event Management We are a professional & creative team of event management specialists.

Samudyatha Events has combined with the many years of experience in producing high-quality events of every type and scale.

ಮೇಘನಾ ಕುಂದಾಪುರ.ನಾದ ನಭದ ಹೊಸ ಬಾನಾಡಿ.ರಂಗಗೀತೆಗಳನ್ನು ಅದ್ಭುತವಾಗಿ ಪ್ರಸ್ತುತಪಡಿಸುವ ಈ ಯುವ ಗಾಯಕಿಯ ತಾರಕ ಸ್ಥಾಯಿಯ ಗೀತೆಗಳು ಕರ್ಣಾನಂದ! ಹಾ...
14/12/2025

ಮೇಘನಾ ಕುಂದಾಪುರ.
ನಾದ ನಭದ ಹೊಸ ಬಾನಾಡಿ.ರಂಗಗೀತೆಗಳನ್ನು ಅದ್ಭುತವಾಗಿ ಪ್ರಸ್ತುತಪಡಿಸುವ ಈ ಯುವ ಗಾಯಕಿಯ ತಾರಕ ಸ್ಥಾಯಿಯ ಗೀತೆಗಳು ಕರ್ಣಾನಂದ! ಹಾಡುಗಳನ್ನು ಅನುಭವಿಸಿ ಹಾಡುವ ಮೇಘನಾರ ಹಾಡುಗಳ ಪ್ರಸ್ತುತಿ ಚೆಂದ:ನೋಡಲು,ಕೇಳಲು!
#ಸತ್ಯಾವತಾರ

ರಾಮಚಂದ್ರ ಹಡಪದ ಎನ್ನುವ ಬೆರಗುಗೊರಳಿನ ಕಲಾವಿದನ ಗಾಯನ ಶ್ರೀಮಂತಿಕೆಯನ್ನು ಕರಾವಳಿಗೆ ಪರಿಚಯಿಸಲು ಉತ್ಸುಕರಾಗಿದ್ದೇವೆ ನಾವು.ಇದೇ ಡಿಸೆಂಬರ್ 20ರ ...
11/12/2025

ರಾಮಚಂದ್ರ ಹಡಪದ ಎನ್ನುವ ಬೆರಗುಗೊರಳಿನ ಕಲಾವಿದನ ಗಾಯನ ಶ್ರೀಮಂತಿಕೆಯನ್ನು ಕರಾವಳಿಗೆ ಪರಿಚಯಿಸಲು ಉತ್ಸುಕರಾಗಿದ್ದೇವೆ ನಾವು.ಇದೇ ಡಿಸೆಂಬರ್ 20ರ ಸಂಜೆ ಸತ್ಯಾವತಾರ ಎನ್ನುವ ಡಾ.ಸಿ.ಅಶ್ವಥ್ ಸ್ವರ ಸಂಯೋಜನೆಯ ಹಾಡುಗಳನ್ನು ಪ್ರಸ್ತುತಪಡಿಸುವ ಕಾರ್ಯಕ್ರಮದಲ್ಲಿ ರಾಮಚಂದ್ರ ಹಡಪದರ ಸುರ ಸಂಗೀತವಿದೆ! ವಿಶೇಷವಾಗಿ ತತ್ವಪದಗಳು ಹಾಗೂ ಏರು ಶ್ರುತಿಯ ಗೀತೆಗಳನ್ನು ಹಡಪದರ ಕಂಠಸಿರಿಯಲ್ಲಿ ಕೇಳೋದು ಸ್ವರ್ಗ.ಪುಣ್ಯಾತ್ಮ ತಾರಕಕ್ಕೆ ನಮ್ಮನ್ನು ಕರೆದೊಯ್ದರೆ ಅಲ್ಲಿಂದ ಇಳಿಯೋಕೇ ಮನಸ್ಸು ಕೇಳೋದಿಲ್ಲ.ಬೇಂದ್ರೆ,ಕುವೆಂಪು,ಜಿಎಸ್ಎಸ್ ಮೊದಲಾದ ಕವಿವರೇಣ್ಯರ ಕವಿತೆಗಳು ಹಡಪದರ ಸ್ವರ ಸಂಚಾರದಲ್ಲಿ ಹೊಸ ಹೊಳಹು ಮೂಡಿಸಿದರೂ ಅಚ್ಚರಿಯಿಲ್ಲ.ಹೌದು.ರಾಮಚಂದ್ರ ಹಡಪದರಿಗೆ ದಟ್ಟ ರಂಗಭೂಮಿ ಹಿನ್ನೆಲೆಯಿದೆ.ಬಹುಶಃ ಈ ಕಾರಣಕ್ಕೆ ಹಡಪದರಿಗೆ ಅಶ್ವಥ್‌ರನ್ನು ಆವಾಹಿಸಿಕೊಳ್ಳುವುದು ಸುಲಭ ಸಾಧ್ಯವೇನೋ?
ಶ್ರುತಿಗೊಳ್ಳುತ್ತಿದೆ ಕುಂದಾಪುರ.
ನೀವು ದಿನಾಂಕ ಮರೆಯಬೇಡಿ.

#ಸತ್ಯಾವತಾರ

ಬಂಧುಗಳೆ ನಿಮಗೆ ಗೊತ್ತೇ ಇದೆ.ಡಾ.ಸಿ.ಅಶ್ವಥ್ ಎಂತಹ ದೈತ್ಯ ಸಂಗೀತ ಪ್ರತಿಭೆ ಎನ್ನುವುದು! ಧಾರಾವಾಹಿಯ ಶೀರ್ಷಿಕೆ ಗೀತೆಗಳು,ಸುಗಮ ಸಂಗೀತ,ತತ್ವ ಪದಗ...
08/12/2025

ಬಂಧುಗಳೆ
ನಿಮಗೆ ಗೊತ್ತೇ ಇದೆ.ಡಾ.ಸಿ.ಅಶ್ವಥ್ ಎಂತಹ ದೈತ್ಯ ಸಂಗೀತ ಪ್ರತಿಭೆ ಎನ್ನುವುದು! ಧಾರಾವಾಹಿಯ ಶೀರ್ಷಿಕೆ ಗೀತೆಗಳು,ಸುಗಮ ಸಂಗೀತ,ತತ್ವ ಪದಗಳು,ಸಿನಿ ಸಂಗೀತ... ಅಶ್ವಥ್‌ರ ಸಂಗೀತ ಕೃಷಿ 'ಸುನೀಲ ವಿಸ್ತರ'.ಈ ಅದ್ಭುತ ಸ್ವರ ಸಂಯೋಜಕರ ಆಯ್ದ ಗೀತೆಗಳನ್ನು ಅದರೆಲ್ಲಾ ಭಾವತೀವೃತೆ ಹಾಗೂ ಮಾಧುರ್ಯದ ಸಮೇತ ಮತ್ತೊಮ್ಮೆ ಮೊಗೆದುಕೊಡುವ ಪ್ರಯತ್ನ 'ಸತ್ಯಾವತಾರ' ಎನ್ನುವ ಹೆಸರು ಹೊತ್ತು ಕುಂದಾಪುರದ ತೆಕ್ಕಟ್ಟೆಯಲ್ಲಿ ಸಾಕಾರಗೊಳ್ಳಲಿದೆ ಇದೇ ಡಿಸೆಂಬರ್ 20ರ ಸಂಜೆ.
ಸಂಜೆಯ ಸೊಬಗನ್ನು ಮಧುರಗೊಳಿಸುವರೆ ನಿಮ್ಮ ಹಾಜರಿ ಜರೂರು.
ದಯಮಾಡಿ ದಿನಾಂಕ ನೆನಪಿಡಿ.

#ಸತ್ಯಾವತಾರ

ಪ್ರಿಯರೆ ಮಾಗಿಯ ಚಳಿ ಹಿತವಾದ ಕಚಗುಳಿಯಿಡಬಹುದಾದ ಇದೇ ಡಿಸೆಂಬರ್ ತಿಂಗಳು 20ನೇ ತಾರೀಕು ಸಾಯಂಕಾಲ ಡಾ.ಸಿ.ಅಶ್ವಥ್ ಸ್ವರ ಸಂಯೋಜನೆಯ ಆಯ್ದ ಗೀತೆಗಳ ...
30/11/2025

ಪ್ರಿಯರೆ
ಮಾಗಿಯ ಚಳಿ ಹಿತವಾದ ಕಚಗುಳಿಯಿಡಬಹುದಾದ ಇದೇ ಡಿಸೆಂಬರ್ ತಿಂಗಳು 20ನೇ ತಾರೀಕು ಸಾಯಂಕಾಲ ಡಾ.ಸಿ.ಅಶ್ವಥ್ ಸ್ವರ ಸಂಯೋಜನೆಯ ಆಯ್ದ ಗೀತೆಗಳ ಮಧುರ ಪ್ರಸ್ತುತಿಯ ಕಾರ್ಯಕ್ರಮ:*ಸತ್ಯಾವತಾರ*ವನ್ನು ಆಯೋಜಿಸುತ್ತಿದ್ದೇವೆ.ಭಾವಗೀತಾ ಪ್ರಪಂಚದ ಜೇನ್ಗೊರಳು One and Only MD ಪಲ್ಲವಿಯವರ ಜೊತೆ ನಮ್ಮೂರ ಚಿನಕುರುಳಿ ಗಾಯಕಿ ಮೇಘನಾ ಜೊತೆಗೆ ಪ್ರಸ್ತುತ ಪರಮಪದದ ಮೂಲಕ ನಾಡಿನಾದ್ಯಂತ ಹೊಸ ಸಂಚಲನಗೈಯುತ್ತಿರುವ ರಾಮಚಂದ್ರ ಹಡಪದರ ಗಾನ ಸಾರಥ್ಯವಿದೆ.ಹುಸಿ ಕಾವ್ಯದ ಲಯದ ನಿರೂಪಣಾ ಚತುರ ರಾಘವೇಂದ್ರ ಕಾಂಚನ್‌ ಜೊತೆಗಿರುತ್ತಾರೆ .ಕನ್ನಡ ಕವಿವರೇಣ್ಯರುಗಳ ಕವಿತೆಗಳ ಭಾವ ವೈಭವ ಸಹೃದಯರ ಕಿವಿ ತುಂಬುವಲ್ಲಿ ಹೊಸ ಸಾಧ್ಯತೆಗಳನ್ನು ಯೋಚಿಸಿದ, ಡಾ.ಸಿ.ಅಶ್ವಥ್‌ರ ಸಂಗೀತ ಪ್ರತಿಭೆಯನ್ನು ಕನ್ನಡ ಸಿನಿಮಾಗಳಲ್ಲೂ ಅತ್ಯಂತ 'ಧ್ವನಿಪೂರ್ಣ'ವಾಗಿ ಬಳಸಿಕೊಂಡ ಟಿ.ಎಸ್.ನಾಗಾಭರಣ,ಡಾ.ಸಿ.ಅಶ್ವಥ್‌ರ ಸ್ವರ ಸಂಯೋಜನೆಯ 'ಸುಖ-ದುಖ'ಗಳನ್ನು ತೀರಾ ಹತ್ತಿರದಿಂದ ಕಂಡುಂಡ ಬಿ ಎಲ್ ಲಕ್ಷ್ಮಣರಾಯರು, ಸಂಗೀತ ಸಾಹಿತ್ಯದ ಅದಮ್ಯ ಪ್ರೀತಿಯ ಜೋಗಿಯವರ ಸ್ವಾರಸ್ಯಪೂರ್ಣ ಮಾತುಕತೆಯೂ ಈ ಸತ್ಯಾವತಾರದ ಸಂಜೆಯನ್ನು ಉಲ್ಲಸಿತಗೊಳಿಸಲಿದೆ.ಖಂಡಿತವಾಗಿಯೂ ಮಧುರ ಸಂಗೀತಾನುಭೂತಿ ಈ ವರ್ಷಾಂತ್ಯದ ಕೊನೆಗೆ ಹೊಸ ಆರಂಭವೊಂದಕ್ಕೆ ನಿಮ್ಮನ್ನು ಹುರುಪುಗೊಳಿಸಲಿದೆ.
ಈ ಅವಕಾಶವನ್ನು ನಿಜಕ್ಕೂ ಮಿಸ್ ಮಾಡಿಕೊಳ್ಳಬೇಡಿ.
ನಿಮ್ಮ ನಿರೀಕ್ಷೆಯಲ್ಲಿ

~ಸಮುದ್ಯತಾ ಬಳಗ.

 #ಸತ್ಯಾವತಾರಡಾ.ಸಿ.ಅಶ್ವಥ್.ಸುಗಮ ಸಂಗೀತಕ್ಕೊಂದು ಹೊಸ ದಿಸೆ ಕಲ್ಪಿಸಿದ ಮಾಂತ್ರಿಕ ಸಂಗೀತ ಸಂಯೋಜಕ,ಗಾಯಕ.ಅಶ್ವಥ್‌ರ ಆ ಏರು ದನಿ ಕನ್ನಡ ಭಾವಗೀತಾ ...
11/11/2025

#ಸತ್ಯಾವತಾರ

ಡಾ.ಸಿ.ಅಶ್ವಥ್.
ಸುಗಮ ಸಂಗೀತಕ್ಕೊಂದು ಹೊಸ ದಿಸೆ ಕಲ್ಪಿಸಿದ ಮಾಂತ್ರಿಕ ಸಂಗೀತ ಸಂಯೋಜಕ,ಗಾಯಕ.
ಅಶ್ವಥ್‌ರ ಆ ಏರು ದನಿ ಕನ್ನಡ ಭಾವಗೀತಾ ಪ್ರಪಂಚದಲ್ಲಿ ಸೃಷ್ಟಿಸಿದ ರಸರೋಮಾಂಚನ,ಅವರ ಸಂಯೋಜನೆಯ ಹಾಡುಗಳಲ್ಲಿನ ಆ ಮೊರೆವ ಮಾಧುರ್ಯ ಅಶ್ವಥ್‌ರನ್ನು ಒಬ್ಬ ಸಂಗೀತಗಾರನನ್ನಾಗಿ ರಸಿಕರೆದೆಗಳಲ್ಲಿ ಸ್ಥಾಯಿಗೊಳಿಸಿದೆ.ಅಶ್ವಥ್‌ರನ್ನು,ಅವರ ಸ್ವರ ಸಂಯೋಜನೆಯನ್ನು ಆಲಿಸುವುದು ಹೃನ್ಮನಗಳಿಗೆ ಎಂದಿಗೂ ಹಬ್ಬ.ಸಿ.ಅಶ್ವಥ್ ಹಾಡುಗಳು ಒಂದಕ್ಕಿಂತ ಒಂದು ಭಿನ್ನ,ಚಿನ್ನ.
ಮೊಗ್ಗಿನಿಂದ ಸೆರೆಯೊಡೆದ ಗಂಧ ಹೂವಿಂದ ದೂರ,ದೂರ
ಎಲ್ಲುಂಟು ಆಚೆ ತೀರ?
ಅಶ್ವಥ್ ಹಾಡುಗಳ ಕಡಲಿಗೆ ತೀರವಾಗುವ ಬಯಕೆಗೆ ಮತ್ತೆ ಎದುರಾಗುತ್ತಿದೆ ಕಡಲೂರು ಕುಂದಾಪುರ.ಸಮುದ್ಯತಾ ಸಮೂಹ ಸಿ ಅಶ್ವಥ್ ಸ್ವರ ಸಂಯೋಜನೆಯ ಹಾಡುಗಳ ಸವಿ ಸಂಜೆಯೊಂದನ್ನು ಅಚ್ಚುಕಟ್ಟಾಗಿ ಆಯೋಜಿಸುತ್ತಿದೆ:ತೆಕ್ಕಟ್ಟೆ ಪ್ರೆಸಿಡೆಂಟ್ ಕನ್‌ವೆನ್ಶನ್ ಸೆಂಟರ್‌ನ ತೆರೆದ ಸಭಾಂಗಣದಲ್ಲಿ.ಇದೇ ಡಿಸೆಂಬರ್ 20ರ ಸಂಜೆ.
ಅಶ್ವಥ್‌ರ ಹಾಡುಗಳ ಈ ಪಯಣವನ್ನು ಇನ್ನಷ್ಟು ಖುಷಿಗೊಳಿಸುವರೆ ಅಶ್ವಥ್‌ರ ಸಂಗೀತಕ್ಕೆ ಸರಿಮಿಗಿಲೆನಿಸುವ ಅಶ್ವಥ್‌ರ ಸಹವರ್ತಿಗಳ ಮಾತುಗಳ ನವನೀತವಿದೆ!
ಹತ್ತವತಾರಗಳಲ್ಲಿ ಕನ್ನಡದ ಮನಗಳನ್ನು ಅರಳಿಸಿದ ಡಾ.ಅಶ್ವಥ್‌ರ ಹಾಡುಗಳ ಈ ಕಾರ್ಯಕ್ರಮವನ್ನು ನಾವು ಸತ್ಯಾವತಾರ ಎಂದು ಕರೆದಿದ್ದೇವೆ.ಅಶ್ವಥ್‌ರ ಸ್ವರ ಸಂಚಾರವನ್ನು ಅನುಭವಿಸಿ,ನಮ್ಮನ್ನೆಲ್ಲಾ ಆ ತಾರಕಕ್ಕೆ ತಲುಪಿಸಬಲ್ಲ ಏರು ಶೃತಿಯ ಗಾಯಕ,ಗಾಯಕಿಯರು,ಅಶ್ವಥ್‌ರ ಮೂಲ ಸಂಯೋಜನೆಯ ಸಾಮೀಪ್ಯವನ್ನು ತಲುಪಬಲ್ಲ ವಾದ್ಯವೃಂದ ಹಾಗೂ ಚೇತೋಹಾರಿ ನಿರೂಪಣೆಯ ಮಾತುಗಳು ಸತ್ಯಾವತಾರವನ್ನು ಮುನ್ನೆಡೆಸಲಿವೆ.
ಬನ್ನಿ:ತಪ್ಪಿ ಹೋದ ಚುಕ್ಕಿಯ ಜಾಡನ್ನು ಅರಸುತ್ತಾ
ಅಶ್ವಥ್‌ರನ್ನು ಆಲಿಸೋಣ!

31/10/2025

ಹಣವಂತರಿಗೆ ಹಣ ಮಾಡುವುದೇ ಚಿಂತೆ ಎಂದಾಗಾಯ್ತು, ಸುದೀಪ್ ಅವರ ತಂದೆ ಹೋಟೆಲ್ ಇದು

22/09/2025
14/08/2025

✨ One of our dearest clients, 𝐉𝐚𝐧𝐚𝐭𝐡𝐚 𝐆𝐫𝐨𝐮𝐩 💖It was a beautiful surprise for 𝐌𝐫. 𝐀𝐬𝐡𝐨𝐤’𝐬 𝟓𝟎𝐭𝐡 𝐛𝐢𝐫𝐭𝐡𝐝𝐚𝐲 🎉 A heartfelt thanks for trusting us to be part of this special milestone. 💐

26/07/2025
For This Year’s 𝐊𝐮𝐧𝐝𝐚𝐩𝐮𝐫𝐚 𝐊𝐚𝐧𝐧𝐚𝐝𝐚 𝐇𝐚𝐛𝐛𝐚…Experience the true taste of the coast with 𝐒𝐚𝐦𝐮𝐝𝐲𝐚𝐭𝐡𝐚 𝐂𝐚𝐭𝐞𝐫𝐞𝐫𝐬!Authentic coasta...
22/07/2025

For This Year’s 𝐊𝐮𝐧𝐝𝐚𝐩𝐮𝐫𝐚 𝐊𝐚𝐧𝐧𝐚𝐝𝐚 𝐇𝐚𝐛𝐛𝐚…
Experience the true taste of the coast with 𝐒𝐚𝐦𝐮𝐝𝐲𝐚𝐭𝐡𝐚 𝐂𝐚𝐭𝐞𝐫𝐞𝐫𝐬!
Authentic coastal cuisine served with love and tradition.
Come, savour the flavours of 𝐍𝐚𝐦𝐦𝐚 𝐊𝐮𝐧𝐝𝐚𝐩𝐮𝐫𝐚!!

Address

#2/19(2), Kanchan's Complex Near Santhe Market Kota
Udupi
576221

Opening Hours

Monday 9am - 6pm
Tuesday 9am - 6pm
Wednesday 9am - 6pm
Thursday 9am - 6pm
Friday 9am - 6pm
Saturday 9am - 6pm

Telephone

+919480459777

Alerts

Be the first to know and let us send you an email when Samudyatha Event Management posts news and promotions. Your email address will not be used for any other purpose, and you can unsubscribe at any time.

Contact The Business

Send a message to Samudyatha Event Management:

Share

Category