Siddhhaa Events

Siddhhaa Events one of the best event management company in Belagavi Please contact us...! enjoy your Happy Moments with us..

24/03/2020

#ಕೊರೋನಾ_ಕಣ್ಣೀರಿನ_ನೈಜ_ಕಥೆಗಳು.
ಕೊರೋನಾ ಕಪ್ಯೂ೯ದಿಂದ
ಕರಳು ಹಿಂಡುವ ನೈಜ ಕಥೆಗಳು ಕಣ್ಮುಂದೆ ಬಂದು ಕಣ್ಣೀರು ಹನಿ ಹನಿಯಾಗಿ ಕೆಳಕ್ಕೆ ಬಿದ್ದವು. ಈ ಸೀನ್ ನೋಡಿ ಸಿರಿಯಸ್ ಆಗಿ ಮಾತನಾಡುವ ಬದಲು ಮನಸ್ಸು ಮೌನಕ್ಕೆ ಜಾರಿತು. ಮೂಕ ಪ್ರೇಕ್ಷಕರಾದ ನಾವು ನಾಕೂ ತಂತಿ ಹರಿದ ವೀಣೆಯಾಂತಾದೇವು.ಕಳೆದ ಮೂರ್ನಾಲ್ಕು ದಿನಗಳಿಂದ ಒಂದೊತ್ತು ಊಟಕ್ಕೂ ಗತಿಯಿಲ್ಲದ ಈ ಮಕ್ಕಳ ಗೋಳು ಕೇಳುವರಾರು? ಕೊರೋನಾ ಎಂದರೇನು ಕಪ್ಯೂ೯ ಎಂದರೆ ಊಟ ಸಿಗುತ್ತಾ ಎಂದು ಕೇಳುವ ಮುಗ್ಧ ಮಕ್ಕಳಿವರು.ಬೆಳಗಾವಿ ಸ್ಮಾರ್ಟ್ ಸಿಟಿಯ ಅಝಾದ್ ನಗರದಲ್ಲಿ ಕೆರೆ ಪಕ್ಕ ಹಗ್ಗಗಳು, ಬೀಸುವ ಕಲ್ಲು, ಕುಟ್ಟುವ ಕಲ್ಲುಗಳನ್ನು ಕೆತ್ತಿ ರಸ್ತೆ ಬದಿ ಮಾರುವ ಕೂಲಿ ಕಾರ್ಮಿಕರ ಮಕ್ಕಳ ಹೊಟ್ಟೆಗೆ ಹಿಟ್ಟಿಲ್ಲದಂತಾಗಿದೆ. ಪುಠಾಣಿ ಕಂದಮ್ಮಗಳ ಕರುಳುಗಳಿಗೆ ಅನ್ನ ನೀಡುವ ಕರುಣಾಮಯಿಗಳ ಕಣ್ಣಿಗೆ ಈ ದೃಶ್ಯ ತಲುಪುವ ಹಾಗೆ ಶೇರ್ ಮಾಡಬೇಕಾಗಿದೆ.ಕುಂದಾನಗರಿಯ ಕರುಣಾಜನಕ ಕಥೆಗಳನ್ನು ಇನ್ನಷ್ಟು
ಕ್ಯಾರಿ ಮಾಡುವ ಕೇರ್ ನಮ್ಮದು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡುವ ಜವಾಬ್ದಾರಿ ನಿಮ್ಮದ್ದು🙏

Story Collated By - DK Motivational Speaker

For Motivational Speach And Updates Please Contact Us-
9483242424

 #ದಂಪತಿಗಳಿಗಾಗಿ_ವಿಶೇಷ_ಸ್ಪರ್ಧೆ ||   ಸ್ಪರ್ಧೆಯಲ್ಲಿ ವಿಜೇತರಾದ ದಂಪತಿಗಳಿಗೆ ಬಹುಮಾನ-1.ಪ್ರಥಮ ಬಹುಮಾನ 1 ಲಕ್ಷ2.ದ್ವಿತೀಯ ಬಹುಮಾನ 50 ಸಾವಿರ...
12/03/2020

#ದಂಪತಿಗಳಿಗಾಗಿ_ವಿಶೇಷ_ಸ್ಪರ್ಧೆ ||

ಸ್ಪರ್ಧೆಯಲ್ಲಿ ವಿಜೇತರಾದ ದಂಪತಿಗಳಿಗೆ ಬಹುಮಾನ-
1.ಪ್ರಥಮ ಬಹುಮಾನ 1 ಲಕ್ಷ
2.ದ್ವಿತೀಯ ಬಹುಮಾನ 50 ಸಾವಿರ
3. ದ್ವಿತೀಯ ಬಹುಮಾನ 25 ಸಾವಿರ

#ಸೆಲೆಬ್ರಿಟಿ_ಜೋಡಿ:
1) ಕನ್ನಡ ಚಲನಚಿತ್ರ ಖ್ಯಾತ ದಂಪತಿಗಳು
2) ಹಿಂದಿ ಚಲನಚಿತ್ರ ಖ್ಯಾತ ದಂಪತಿಗಳು
3) ರಾಜಕೀಯ ಹೆಸರುವಾಸಿಯಾದ ಸಚಿವ ದಂಪತಿಗಳು

ತರಬೇತುದಾರರು:
ಗುರುರಾಜ್ ಕರಜಗಿ, ಚೇತನ್ ರಾಮ್ ಆರ್. ಎ, ಇತ್ಯಾದಿ

ಅಂತರಾಷ್ಟ್ರೀಯ ಖ್ಯಾತಿಯ ತರಬೇತುದಾರರಿಂದ ದಂಪತಿಗಳಿಗೆ ತರಬೇತಿ ನೀಡುವ ಮೂಲಕ ಈ ಕಾರ್ಯಕ್ರಮ ಜರುಗಲಿದೆ..
ಸುಖ ದಾಂಪತ್ಯ, ಆನಂದಮಯ ಜೀವನ, ಉತ್ತಮ ಪೋಷಕ, ಕಪಲ್ ಬಿಜಿನೆಸ್, ಮೋಟಿವೇಶನ್, ಆರೋಗ್ಯದ ಗುಟ್ಟು ಈ ಎಲ್ಲ ವಿಷಯ ಕುರಿತು ತರಬೇತಿ ನೀಡಲಾಗುವುದು. ಕಾರ್ಯಕ್ರಮದಲ್ಲಿ ಬೆಸ್ಟ್ ಕಪಲ್, ಬೆಸ್ಟ್ ಡ್ರೆಸ್ ಕಪಲ್, ಬೆಸ್ಟ್ ಕೋ - ಆರ್ಡಿನೇಷನ್ ಕಪಲ್, ಟೈಮ್ ಮ್ಯಾನೇಜ್ಮೆಂಟ್ ಕಪಲ್, ಬೆಸ್ಟ್ ಜಿ.ಕೆ ಕಪಲ್, ಎಂದು ಇವರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುತ್ತದೆ.

ಮನರಂಜನೆ:
ಕನ್ನಡದ ಕೋಗಿಲೆ ಖ್ಯಾತ ಗಾಯಕರಿಂದ ಸಂಗೀತ ಸಂಜೆ

ಸ್ಥಳ:
UK27 5 Star ಹೋಟೆಲ್, ಬೆಳಗಾವಿ
ಇಲ್ಲಿ ಏರ್ಪಡಿಸಿದ್ದು, ಆಸಕ್ತಿ ಹೊಂದಿರುವ ಜೋಡಿಗಳು ಈ ಫಾರ್ಮ್ ಅನ್ನು ತುಂಬಿ ನೋಂದಣಿ ಮಾಡಿಕೊಳ್ಳಿ..!

Date: 12/04/2020
Time: 10 AM to 6 PM

08/03/2020

#ಡೆಡಿಕೇಶನ್_ಡೆಡ್ಲಿ_ಡೆರಿಂಗ್_ಅಂದ್ರೆ_ಇದೇನಾ?

ಈ ಸ್ಟೋರಿ ಓದುವ ಮೊದಲು ಸ್ವಲ್ಪ ಧೈರ್ಯ ಶಾಂತ ಚಿತ್ತ ಅತಿ ಅವಶ್ಯ. ನಿಜ ಘಟನೆಯನ್ನು ನಿಮ್ಮ ಮನ ಮಂದಿರದಲ್ಲಿ ಮೂಡಿಸಿಕೊಳ್ಳುವ ಮುನ್ನ ಈ ದೃಶ್ಯಗಳನ್ನು ಕಲ್ಪಿಸಿಕೊಳ್ಳುವದು ಅತಿ ಮುಖ್ಯ.
ಅನಾಮಿಕನೊಬ್ಬ ಅವಸರದಲ್ಲಿ ಮನೆಯಾಚೆ ಬಂದು ಆ ಕಾಡಂಚಿನ ಗ್ರಾಮದಲ್ಲಿ ಮಹಿಳೆರ್ಯೊವಳು ಹೆರಿಗೆ ನೋವಿನಿಂದ ಒದ್ದಾಡಿ ಜೀವ ಮರಣದ ಮಧ್ಯೆ ಹೋರಾಡುತ್ತಿದ್ದಾಳೆ ಎಂದ. ಈ ವಿಷಯ ತಿಳಿದ ತ ತಕ್ಷಣವೇ ಕಾರ್ಯಪ್ರವತ್ತ೯ಳಾದ ಈ ಮಹಿಳೆ ತನ್ನ ಚಿಕ್ಕ, ಪುಟ್ಟ ಪುಠಾಣಿ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಸೈಕಲ್ ಸವಾರಿ ಆರಂಭಿಸಿದಳು. ಹತ್ತಾರು ಫರ್ಲಾಂಗ್ ಪಯಣಿಸುತ್ತಿದ್ದಂತೆ ಪ್ರಾಬ್ಲಂ ಆಗಿದ್ದು ಮಲಪ್ರಭಾ ನದಿ. ಛಲಬೀಡದ ಧೀರ ಮಹಿಳೆ ತುಂಬಿದ ನದಿಯನ್ನು ಈಜಿ ಆ ದಡ ಸೇರಿದಳು. ಗರ್ಭಿಣಿ ಮಹಿಳೆ ಜೀವ ಉಳಿಸಿ ಗಂಡು ಮಗುವಿನ ಜನ್ಮ ಸುಗಮಗೊಳಿಸಿದಳು. ಇದೇ ಸಂಧರ್ಭದಲ್ಲಿ ಆ ಕುಗ್ರಾಮದಲ್ಲಿ ಕೊಲೆಯೊಂದು ನಡೆದು ಊರಿಗೆ ಊರೇ ಸ್ಥಬ್ದವಾಗಿತ್ತು. ಧೈರ್ಯವಂತರಿಗೆ ದೇವರೇ ದಾರಿ ತೋರಿಸುತ್ತಾನೆ ಎನ್ನುವ ಹಾಗೆ ಮಹಿಳೆ ಮರಳಿ ಬರುವಾಗ ಮತ್ತೊಂದು ರೋಮಾಂಚಕಾರಿ ಘಟನೆ ಮೈ ನವಿರೇಳಿಸುವಂಥದ್ದು.
ವರುಣನ ವಕ್ರದೃಷ್ಟೀ ಧಾರಾಕಾರ ಮಳೆ ಧರೆಗುರುಳುತ್ತಿತ್ತು. ನಡು ದಾರಿಯಲ್ಲಿ ನರಭಕ್ಷಕ ಕಾಡು ಪ್ರಾಣಿಗಳ ಕಾಟ ಬದುಕುವ ಕಾನ್ಫಿಡೆನ್ಸ್ ಗೆ ಸವಾಲು ಹಾಕಿತ್ತು. ಎಲ್ಲದರಲ್ಲೂ ಯಶಸ್ವಿಯಾಗಿ ಮುಂದೆ ಬಂದು ಮತ್ತೆ ನೀರಿಗೆ ಹಾರಿ ಈಜಿ ದಡ ಸೇರಿದಳು ಮಹಿಳೆ. ಕೆಸರುಗದ್ದೆಗಳಲ್ಲಿ ಸವಾಲಿನ ಸೈಕಲ್ ಸವಾರಿ‌ ಮಾಡಿ ಖಾನಾಪೂರಕ್ಕೆ ಕಾಲಿಟ್ಟಾಗ ಚಂದ್ರನ ಬೆಳದಿಂಗಳ ಬೆಳಕು ಸ್ವಾಗತಕ್ಕೆ ಬಂದಿತ್ತು.ನಂತರ ಅನ್ನ ಬೇಯಿಸಿ ಮಕ್ಕಳಿಗೆ ಬಡಿಸಿದ ಈ ಸ್ಟೋರಿ ಹೇಳುವ ಡಾಕ್ಟರ್ ಅಜ್ಜಿ ಯ ವಯಸ್ಸು ಇಗ ಜಸ್ಟ ___99. ಬೆಳಗಾವಿಯ ಡಾಃ ಇಂದಿರಾಬಾಯಿ ಜೋಶಿ ಪ್ರಸೂತಿ ಗ್ರಹದಲ್ಲಿ 50 ಸಾವಿರಕ್ಕು ಹೆಚ್ಚು ಸರಳ ಸಾಮಾನ್ಯ ಹೆರಿಗೆಗಳಾಗಿವೆ. ಇವರ ಜಿವನ ಶೈಲಿ ಅಂತರಾಷ್ಟ್ರೀಯ ‌ಮಹಿಳಾ ದಿನಾಚರಣೆಗೆ ಪ್ರೇರಣೆಯಲ್ಲವೇ ?



Laxmi Hebbalkar Beautiful Belagavi Belagavi - ಬೆಳಗಾವಿ Ashraya Foundation Belagavi

26/09/2018
21/09/2018
21/09/2018
1ST NOVEMBER 2016
21/09/2018

1ST NOVEMBER 2016

21/09/2018
LAUGHTER CLUB
21/09/2018

LAUGHTER CLUB

Address

Belgaum
590001

Alerts

Be the first to know and let us send you an email when Siddhhaa Events posts news and promotions. Your email address will not be used for any other purpose, and you can unsubscribe at any time.

Contact The Business

Send a message to Siddhhaa Events:

Share

Category