17/07/2020
ಕುರುಡು ಕಾಂಚಾಣ ಕುಣಿಯುತಲಿತ್ತು, ಕಾಲಿಗೆ ಬಿದ್ದವರ ತುಳಿಯುತಲಿತ್ತೋ !!!
ಮಾನವನು ವಿಜ್ಞಾನ-ತಂತ್ರಜ್ಞಾನದ ಆಸರೆಯಲ್ಲಿ ಅಭಿವೃದ್ಧಿಯ ಉತ್ತುಂಗದಲ್ಲಿದ್ದರೂ, ತನ್ನ ಮನಸ್ಸನ್ನು ಅರ್ಥೈಸಿಕೊಳ್ಳುವಲ್ಲಿ ಮತ್ತು ನಿಯಂತ್ರಿಸುವಲ್ಲಿ ಸೋತು ಹೋಗಿದ್ದಾನೆ. ಬಿಡುವಿಲ್ಲದ ಲೌಕಿಕ ವ್ಯವಹಾರದಲ್ಲಿ ವ್ಯಸ್ತನಾಗುವ ಮೂಲಕ ಯಂತ್ರವೇ ಆಗಿಬಿಟ್ಟಿದ್ದಾನೆ. ಹಲವು ವರುಷಗಳ ಕಾಲ ನಿರಂತರವಾದ ದುಡಿಮೆಯನ್ನು ಮಾಡಿದರೂ ಆತನ ವ್ಯಕ್ತಿತ್ವವು ಪರಿಪಕ್ವವಾಗುವುದಿಲ್ಲ. ಸುಖ-ಸೌಲಭ್ಯಗಳು,ಧನ-ಕನಕಾದಿಗಳು ಹೇರಳವಾಗಿ ಸಂಗ್ರಹವಾಗುತ್ತದೆ. ಆದರೆ ಮನಸ್ಸು ಸದಾ ಅಸಹನೆಯಿಂದ ,ಖಿನ್ನತೆಯಿಂದ ಚಡಪಡಿಸುತ್ತಿರುತ್ತದೆ. ಹೀಗಿರುವಾಗ ಇಂದಿನ ವಾಸ್ತವ ಅಭಿವೃದ್ಧಿ - ಊರ್ಧ್ವಮುಖವೋ? ಅಧೋಮುಖವೋ?
ರಸ್ತೆಗಳು ವಿಶಾಲವಾಗಿವೆ, ಆದರೆ ದೃಷ್ಟಿಕೋನ ಸಂಕುಚಿತವಾಗಿವೆ!
ನಾವು ಹೆಚ್ಚು ಖರೀದಿಸುತ್ತೇವೆ, ಆದರೆ ಕಡಿಮೆ ಉಪಯೋಗಿಸುತ್ತೇವೆ!
ನಮ್ಮ ಮನೆಗಳು ದೊಡ್ಡದಾಗುತ್ತಿವೆ, ಆದರೆ ಕುಟುಂಬ ಚಿಕ್ಕದಾಗಿರುತ್ತದೆ !
ಅನುಕೂಲಗಳು ಹೆಚ್ಚಿವೆ, ಆದರೆ ಅನುಭವಿಸಲು ಸಮಯವೇ ಇಲ್ಲ!
ಅಸಾಮಾನ್ಯ ವಿದ್ಯಾರ್ಹತೆಗಳಿವೆ,ಆದರೆ ಸಾಮಾನ್ಯ ಜ್ಙಾನ ಕಡಿಮೆಯಾಗಿದೆ!
ವಿಷಯ ಸಂಗ್ರಹ ಹೆಚ್ಚಾಗಿದೆ, ಆದರೆ ವಿವೇಚನೆ ಕಡಿಮೆಯಾಗಿದೆ!
ಪರಿಣತರು ಹೆಚ್ಚಿದ್ದಾರೆ, ಸಮಸ್ಯೆಗಳು ಹೆಚ್ಚಿವೆ!
ಔಷಧಿಗಳು ಹೆಚ್ಚಿವೆ, ಆರೋಗ್ಯ ಕಡಿಮೆಯಾಗಿದೆ!
ನಾವು ಹೆಚ್ಚು ಗಳಿಸುತ್ತೇವೆ, ಆದರೂ ನೆಮ್ಮದಿಯಿಂದ ಜೀವಿಸುತ್ತಿಲ್ಲ.
ತುಂಬ ವೇಗವಾಗಿ ಹೋಗುತ್ತೇವೆ,ತುಂಬ ಬೇಗ ಕೋಪಿಸಿಕೊಳ್ಳುತ್ತೇವೆ!
ರಾತ್ರಿ ತುಂಬ ಹೊತ್ತು ಎದ್ದಿರುತ್ತೇವೆ, ಬೆಳಿಗ್ಗೆ ತುಂಬ ಬಳಲುತ್ತೇವೆ
ಕಡಿಮೆ ಓದುತ್ತೇವೆ, ತುಂಬ ಟೀವಿ ನೋಡುತ್ತೇವೆ:
ತೋರಿಕೆಯ ಭಕ್ತಿ ಜಾಸ್ತಿ, ಪರಿಶುದ್ಧ ಮನದ ಪ್ರಾರ್ಥನೆ ಕಡಿಮೆ
ನಮ್ಮ ಆಸ್ತಿ ಪಾಸ್ತಿಗಳ ಬೆಲೆ ಏರಿದೆ,ಆದರೆ ನಮ್ಮ ಮೌಲ್ಯಗಳು ಕುಸಿದಿವೆ!
ತುಂಬಾ ಹೆಚ್ಚು ಮಾತನಾಡುತ್ತೇವೆ,ತುಂಬ ಕಡಿಮೆ ಪ್ರೀತಿಸುತ್ತೇವೆ ಜೊತೆಗೆ ತುಂಬ ಸುಳ್ಳು ಹೇಳುತ್ತೇವೆ!
ನಮ್ಮ ಜೀವನಕ್ಕೆ ವರ್ಷಗಳನ್ನು ತುಂಬುತ್ತೇವೆ, ಆದರೆ ವರ್ಷಗಳಿಗೆ ಜೀವ ತುಂಬುವುದಿಲ್ಲ!
ನಾವು ಚಂದ್ರಲೋಕವನ್ನು ಮುಟ್ಟಿ ಬಂದಿದ್ದೇವೆ, ಆದರೆ ನಮ್ಮ ಕಾಂಪೌಂಡ ದಾಟಿ ನೆರೆಯವರನ್ನು ಭೇಟಿಯಾಗಲು ಹೋಗುವುದಿಲ್ಲ.
ನಾವು ಬಹಿರಂಗದಲ್ಲಿ ಗೆದ್ದವರಂತೆ ಅಂದುಕೊಳ್ಳುತ್ತೇವೆ, ಆದರೆ ಅಂತರಂಗದಲ್ಲಿ ಸೋಲುತ್ತಿದ್ದೇವೆ!
ಗಾಳಿಯನ್ನು ಶುದ್ಧಿಗೊಳಿಸಲು ಹೆಣಗುತ್ತೇವೆ, ಆದರೆ ನಮ್ಮ ಆತ್ಮ ಮಲೀನಗೊಂಡಿದ್ದು ನಮಗೆ ಗೋಚರವಾಗುವುದಿಲ್ಲ.
ಬರವಣಿಗೆ ಹೆಚ್ಚಾಗಿದೆ, ಆದರೆ ಅರಿವು ಕಡಿಮೆಯಾಗಿದೆ!
ಹೆಚ್ಚು ಆಲೋಚಿಸುತ್ತೇವೆ, ಆದರೆ ಕಡಿಮೆ ಸಾಧಿಸುತ್ತೇವೆ!
ನಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದೆ,ಆದರೆ ನೈತಿಕತೆ ಕುಸಿದಿದೆ!
ಇದು ವಿವಿಧ ಭಕ್ಷಗಳ ಕಾಲ, ಆದರೆ ಕಡಿಮೆ ಜೀರ್ಣಶಕ್ತಿಯ ಕಾಲ
ಎತ್ತರದ ನಿಲುವು ಠೀವಿ, ಆದರೆ ಕುಬ್ಜ ವ್ಯಕ್ತಿತ್ವ
ವಿಶ್ವಶಾಂತಿಯ ಬಗ್ಗೆ ಮಾತನ್ನಾಡುತ್ತೇವೆ, ಆದರೆ ಮನೆಯಲ್ಲಿ ಕಾದಾಡುತ್ತೇವೆ!
ಗಂಡ ಹೆಂಡಿರ ದುಡಿಮೆ ಹೆಚ್ಚಾಗಿದೆ, ಆದರೆ ಸಂಬಂಧಗಳು ಛಿದ್ರಗೊಂಡು ವಿಚ್ಛೇದನಗಳು ಹೆಚ್ಚಾಗಿವೆ!
ಅದ್ಬುತ ವಿನ್ಯಾಸದ ನಿವಾಸಗಳಿವೆ,ಆದರೆ ಮನಶ್ಯಾಂತಿ ಮುರಿದುಬಿದ್ದಿದೆ.
ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)