SDP Caterer's, Bangalore

SDP Caterer's, Bangalore Contact information, map and directions, contact form, opening hours, services, ratings, photos, videos and announcements from SDP Caterer's, Bangalore, Caterer, Gottigere, Bangalore.

SDP Caterers is one of best outdoor catering organisation serving our beloved customers since 2011 in Bangalore city.We specilized in south Indian and North Indian cuisines for family functions.

Mudra for better health!
20/11/2021

Mudra for better health!

Vishnum onde Jagadgurum.
12/11/2021

Vishnum onde Jagadgurum.

29/08/2021

Lokesh Pav Bhaji & Vada Pav - The best Pav Bhaji in Indiranagar Bengaluru ?What comes to your mind when we say Indiranagar? The pubs? The nightlife, probably...

Wish everyone Happy Krishna Janmashtami 2020!
11/08/2020

Wish everyone Happy Krishna Janmashtami 2020!







Do you love?
02/08/2020

Do you love?

24/07/2020
23/07/2020

#ವಿಷ್ಣು__ಸಹಸ್ರನಾಮದ__ಮಹತ್ವ__ತಿಳಿಸಿದ__ಭೀಷ್ಮ
ಮನುಷ್ಯನ ಆಯಸ್ಸು ನೂರು ವರ್ಷ.ಈ ನೂರು ವರ್ಷಗಳಲ್ಲಿ 36 ಸಾವಿರ ಹಗಲು ಮತ್ತು 36 ಸಾವಿರ ರಾತ್ರಿಗಳಿವೆ. ಮನುಷ್ಯ ದೇಹ 72 ಸಾವಿರ ನಾಡಿಗಳಿಂದಾಗಿದೆ. ಈ ನಾಡಿಗಳಲ್ಲಿ 36 ಸಾವಿರ ನಾಡಿಗಳು ಎಡ ಭಾಗದಲ್ಲೂ ಮತ್ತು 36 ಸಾವಿರ ನಾಡಿಗಳು ನಮ್ಮಬಲಭಾಗಲ್ಲೂ ಇರುತ್ತವೆ. ಈ ನಾಡಿಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆದರೆ ಮನುಷ್ಯನಿಗೆ ಯಾವುದೇ ರೋಗ ಬರಲಾರದು.

ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು ನಮಗೆ ಕರುಣಿಸಿದ್ದಾರೆ__

ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ನಾವು ಬ್ರಹತೀಸಹಸ್ರದ 72 ಸಾವಿರ ಅಕ್ಷರಗಳನ್ನು ಜಪಿಸಿದಂತಾಗುತ್ತದೆ. ಇದರಿಂದ ನಮ್ಮ 72 ಸಾವಿರ ನಾಡಿಗಳಲ್ಲಿ ಪೂರ್ಣಪ್ರಮಾಣದ ರಕ್ತ ಸಂಚಾರವಾಗುತ್ತದೆ. ಆದ್ದರಿಂದ ವಿಷ್ಣುಸಹಸ್ರನಾಮ ಭವರೋಗ ಪರಿಹಾರಕ. ಆದರೆ ಅರ್ಥ ತಿಳಿದು ಹೃದಯತುಂಬಿ ಭಕ್ತಿಯಿಂದ ಪಾರಾಯಣ ಮಾಡುವುದು ಮುಖ್ಯ.

ವೇದಗಳಿಗೆ ಕನಿಷ್ಠ 3 ಅರ್ಥಗಳಿವೆ, ಮಹಾಭಾರತ ಶ್ಲೋಕಗಳಿಗೆ ಕನಿಷ್ಠ 10 ಅರ್ಥಗಳಿದ್ದರೆ, ಶ್ರೀ ವಿಷ್ಣು ಸಹಸ್ರನಾಮದ ಪ್ರತೀ ನಾಮಕ್ಕೆ ಕನಿಷ್ಠ ನೂರು ಅರ್ಥಗಳಿವೆ. ಈ ಕಾರಣಕ್ಕಾಗಿಯೇ ಪ್ರಾಚೀನರು ಭಗವದ್ಗೀತೆ ಮತ್ತು ಶ್ರೀ ವಿಷ್ಣುಸಹಸ್ರನಾಮವನ್ನು ಅತ್ಯಮೂಲ್ಯ ಗ್ರಂಥವಾಗಿ ಪರಿಗಣಿಸಿದ್ದಾರೆ. ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು ನಮಗೆ ಕರುಣಿಸಿದ್ದಾರೆ.

ಶರಪಂಜರದ ಮೇಲೆ ಮಲಗಿದ್ದ ಭೀಷ್ಮರನ್ನು ಧರ್ಮರಾಜ ಕೇಳುತ್ತಾನೆ ‘ಇಡೀ ಜಗತ್ತಿನ ದೈವ ? ಯಾರ ಸ್ತುತಿ, ಕೀರ್ತನೆ, ಅರ್ಚನೆಯಿಂದ ನಮಗೆ ಶ್ರೇಯಸ್ಸಾಗುತ್ತದೆ ? ಸಮಸ್ತ ಧರ್ಮಗಳಲ್ಲಿ ಶ್ರೇಷ್ಠ ಧರ್ಮ ಯಾವುದು? ಯಾರ ಜಪ ಮಾಡುವುದರಿಂದ ಸಮಸ್ತ ಪಾಪ ಜನನ-ಮರಣಗಳ ಚಕ್ರದಿಂದ ಮುಕ್ತರಾಗಬಹುದು’? ಈ ಎಲ್ಲ ಪ್ರಶ್ನೆಗಳಿಗೂ ಭೀಷ್ಮಾಚಾರ್ಯರು ಶ್ರೀ ವಿಷ್ಣು ಸಹಸ್ರನಾಮವೆಂದು ಒಂದೇ ಉತ್ತರ ಹೇಳುತ್ತಾರೆ. ಅದಕ್ಕೆ ತಮ್ಮ ಜೀವನದ ಪ್ರಸಂಗವೊಂದನ್ನು ಈ ರೀತಿಯಾಗಿ ವಿವರಿಸುತ್ತಾರೆ.

ನಿಮ್ಮನ್ನು ನಾಶಮಾಡಲೆಂದೇ ದುರ್ಯೋಧನನು ಅರಗಿನ ಅರಮನೆಯಲ್ಲಿ ಅವರು ಉಳಿಯುವಂತೆ ಮಾಡಿ ರಾತ್ರಿಯಲ್ಲಿ ಅದಕ್ಕೆ ಬೆಂಕಿ ಇಡಿಸಿದ್ದ. ಆದರೆ ವಿದುರನ ದೂರದೃಷ್ಟಿ ನಿಮ್ಮನ್ನೇನೋ ಮೃತ್ಯುದವಡೆಯಿಂದ ಪಾರಾಗಿಸಿತ್ತು. ನಿಮಗೆ ಏನು ಆಗಿಲ್ಲವೆಂದು
ತಿಳಿದು ಎಲ್ಲಕ್ಕಿಂತ ಹೆಚ್ಚು ಸಂತೋಷವಾಗಿದ್ದು ನನಗೆ ಸಂತೋಷವಿರಲಿ ದುಃಖವಿರಲಿ ಅದನ್ನು ತಾಯಿ ಗಂಗಾ ಮಾತೆಯೊಡನೆ ಹಂಚಿಕೊಳ್ಳುವುದು ನನಗೆ ಅತ್ಯಂತ ಖುಷಿಯ ಸಂಗತಿಯಾಗಿತ್ತು.

ಹೀಗೇ ಒಂದು ಮುಂಜಾನೆ ಕೈಯಲ್ಲೊಂದು ಊರುಗೋಲು ಹಿಡಿದು ತಾಯಿ ಮಡಿಲೆಡೆಗೆ ಸಾಗುತ್ತಿದ್ದ ನನಗೆ ಮನಸಿನ ತುಂಬಾ ನೀವುಗಳೆ ಆವರಿಸಿಬಿಟ್ಟಿದ್ದಿರಿ . ನೀವು ಅನುಭವಿಸಿದ ಕಷ್ಟಕ್ಕೆ ಮರುಗುತ್ತ ಹೆಜ್ಜೆಹಾಕುತ್ತಿದ್ದ ನಾನು ಊರಿ ನಡೆಯುತ್ತಿದ್ದ ಕೋಲಿನ ತುದಿಗೆ ಆಕಸ್ಮಿಕವಾಗಿ ಓತಿಕ್ಯಾತವೊಂದು ಸಿಲುಕಿ ನರಳಿತು___

ತನ್ನ ಆಲೋಚನಾಸರಣಿಗೆ ಭಂಗವಾಗಿದ್ದಕ್ಕೆ ಗೊಣಗಿದ ನಾನು ಕೋಲಿಗೆ ಸಿಲುಕಿದ ಆ ಓತಿಕ್ಯಾತವನ್ನು ಬೀಸಿ ಎಸೆದು ಮುಂದೆ ನಡೆದರು. ಮುಳ್ಳುಪೊದೆಯ ಮೇಲೆ ಬಿದ್ದ ಅದು ರೋದಿಸುತ್ತ, ‘ಅಯ್ಯಾ! ಮಹಾನುಭಾವರೇ, ಸ್ವಲ್ಪ ನಿಲ್ಲಿ. ನನ್ನನ್ನು ಬೀಸಿ ಎಸೆದು ಸಂಬಂಧವೇ ಇಲ್ಲದಂತೆ ಹೋಗುತ್ತಿದ್ದೀರಲ್ಲ, ಇದು ಸರಿಯೇ?’ ಎಂದಾಗ ನಾನು ‘ಇದರಲ್ಲಿ ನನ್ನದೇನು ತಪ್ಪಿದೆ? ನನ್ನ ಕೋಲಿಗೆ ಸಿಲುಕಿದ್ದು ನೀನೇ ತಾನೆ?!’

ಎಂದಾಗ ‘ಹೌದು! ಸಿಲುಕಿದ್ದು ನಾನೇ. ಆದರೆ ನರಳುತ್ತಿದ್ದ ನನ್ನ ಸ್ಥಿತಿಯನ್ನು ನೋಡಿಯೂ ಮುಳ್ಳಿನ ಪೊದೆಯ ಮೇಲೆ ಎಸೆದಿರಲ್ಲ, ಇದು ನೀವು ತಿಳಿದೂ ಮಾಡಿದ ತಪ್ಪಲ್ಲವೇ? ಹಾಗಾಗಿ ನೀವೂ ನಿಮ್ಮ ಅಂತ್ಯಕಾಲಕ್ಕೆ ಶರಶಯ್ಯೆಯಲ್ಲಿ ನನ್ನಂತೆ ನರಳಿ ಸಾಯುವಂತಾಗಲಿ’ ಎಂದು ಶಪಿಸಿತು. ನನಗೆ ಆಗ ನನ್ನ ತಪ್ಪಿನ ಅರಿವಾಗಿತ್ತು. ಕ್ಷಮೆ ಬೇಡುತ್ತ ಆ ಮುಳ್ಳಿನ ಬೇಲಿಯಿಂದ ಓತಿಕ್ಯಾತವನ್ನು ಮೇಲೆತ್ತಿ ಕಾಪಾಡಲು ಧಾವಿಸಿದರು. ಆದರೆ ಕಾಲ ಮಿಂಚಿತ್ತು. ರಕ್ತಸ್ರಾವಗೊಂಡ ಅದು ಅದಾಗಲೇ ಪ್ರಾಣ ಬಿಟ್ಟಿತು!

ಭೀಷ್ಮಾಚಾರ್ಯರಿಗೆ ವಿಷ್ಣುಸಹಸ್ರನಾಮದ ಶಕ್ತಿ ಸ್ವಯಂ ವೇದ್ಯವಾಗಿತ್ತು. ಅವರು ಮೃತ್ಯುವನ್ನೂ ಸಹ ಆ ಶಕ್ತಿಯಿಂದ ದೂರ ಇಟ್ಟಿದ್ದರು. ಅಷ್ಟೇ ಅಲ್ಲ ಅವರ ಭಕ್ತಿಯ ಶಕ್ತಿಯಿಂದ ಶ್ರೀ ಕೃಷ್ಣ ಪರಮಾತ್ಮ ಅವರು ಮಲಗಿದ್ದ ಕಡೆಗೆ ಬಂದು ದರ್ಶನ, ಸ್ಪರ್ಶನ ಭಾಗ್ಯನೀಡಿದ. ಭೀಷ್ಮಾಚಾರ್ಯರು ಹೇಳುತ್ತಾರೆ. ‘ನ ವಾಸುದೇವ ಭಕ್ತಾನಾಮ್ ಅಶುಭಂ ವಿದ್ಯತೇಕ್ಪಚಿತ್’ ಇದನ್ನು ಪಾರಾಯಣ ಮಾಡುವವರು, ಪರಿಹರಿಸಲಾಗದ ಪರಿಪರಿಯ ಕಷ್ಟಗಳಿಂದ ಬಿಡುಗಡೆ ಹೊಂದುತ್ತಾರೆ. ಅಷ್ಟೇ ಅಲ್ಲ, ವಾಸುದೇವನ ಭಕ್ತರಿಗೆ ಅಶುಭವೆಂಬುದೇ ಇರುವುದಿಲ್ಲ. ಅವರಿಗೆ ಅಪಮೃತ್ಯು, ಮರಣ, ಮುಪ್ಪು ಹಾಗೂ ರೋಗಗಳ ಭಯವಿರುವುದಿಲ್ಲ.

ನಮ್ಮ ಶತ್ರು.ಐಶ್ವರ್ಯoಚ  ಮನಶ್ಚೈವ ಕಾಮಶ್ಚೈವ ಮಹಿತಲೆ ತ್ರಯಯೇತಿ ವಿವೇಕಸ್ಯ ತೇಜೋ ಘನಂತಿ ಕಿಮದ್ಯುತoಅತಿಯಾದ ಐಶ್ವರ್ಯ ಮದ ಕಾಮ ಈ ಮೂರು ಮನುಷ್ಯನ...
18/07/2020

ನಮ್ಮ ಶತ್ರು.

ಐಶ್ವರ್ಯoಚ ಮನಶ್ಚೈವ ಕಾಮಶ್ಚೈವ ಮಹಿತಲೆ ತ್ರಯಯೇತಿ ವಿವೇಕಸ್ಯ ತೇಜೋ ಘನಂತಿ ಕಿಮದ್ಯುತo

ಅತಿಯಾದ ಐಶ್ವರ್ಯ ಮದ ಕಾಮ ಈ ಮೂರು ಮನುಷ್ಯನ ಮೂಲಭೂತ ಶತ್ರುಗಳು ಆಗಿದೆ. ಈ ಮೂರು ಗುಣಗಳು ಮನುಷ್ಯನನ್ನು ಅಣು ಅಣುವಾಗಿ ಕೊಲ್ಲುತ್ತದೆ. ಆತನ ಸರ್ವಾಂಗೀಣ ಅಂದರೆ ಎಲ್ಲ ಕ್ಷೇತ್ರದಲ್ಲೂ ಅವನ ಸರ್ವನಾಶ ಖಂಡಿತ ಆಗುತ್ತದೆ. ಕಣ್ಣು ಇದ್ದು ಕುರುಡರಂತೆ ಮಾನವನ ಜೀವನ ಸಾಗುತ್ತದೆ. ಮಾನವನಿಗೆ ಹೊರಗಣ್ಣು ಮಾತ್ರ ಇರುತ್ತದೆ. ಮಾನವೀಯತೆಯ ಹೃದಯ ಸ್ಪಂದನ ಒಳಗಿನ ಕಣ್ಣು ಕಾಣದ ಹುಟ್ಟು ಕುರುಡುತನದಿಂದ ಆಗಿ ಇಡೀ ವ್ಯಕ್ತಿತ್ವವನ್ನೇ ಹಾಳುಮಾಡುತ್ತದೆ.

ಐಶ್ವರ್ಯ ಎಂದರೆ ಕನ್ನಡದಲ್ಲಿ ಸಂಪತ್ತು ಆಸ್ತಿ ಹಣ ಹೊಂದಿದವನು ಎನ್ನಬಹುದು. ಸಂಸ್ಕೃತದಲ್ಲಿ ಅದಕ್ಕೆ ಇನ್ನೊಂದು ಅರ್ಥವೂ ಇದೆ. ಐಶ್ವರ್ಯ ಎಂದರೆ ಅಧಿಕಾರ ಅಥವಾ ಸರ್ವಾಧಿಕಾರ ಹೊಂದಿದವನು ಎಂದು ಸಹ ಹೇಳಲಾಗುತ್ತದೆ. ಮಾನವಗೆ ಎಷ್ಟು ಬೇಕು ಅಷ್ಟು ಆಸ್ತಿ ಹಣ ಇದ್ದರೆ ಅದು ಒಂದು ರೀತಿಯಲ್ಲಿ ಹಿತಮಿತವಾದ ಜೀವನ ಆಗುತ್ತದೆ. ಅತಿಯಾದ ಸಂಪತ್ತು ಮತ್ತು ಸರ್ವಾಧಿಕಾರ ಮಾನವನನ್ನು ದುಶ್ಚಟ ದುರ್ಬುದ್ಧಿ ಗಳಿಗೆ ದಾಸನನ್ನಾಗಿ ಮಾಡುತ್ತದೆ.

ಮದ ಇದು ಅತಿಯಾದ ಹಣದ ಮತ್ತು ಸರ್ವಾಧಿಕಾರದ ಫಲವಾಗಿ ಮಾನವನಿಗೆ ಬರುತ್ತದೆ. ಇಂತಹ ಸವಲತ್ತು ನಿಂದಾಗಿ ನಾನು ಏನನ್ನು ಬೇಕಾದರೂ ಮಾಡಬಲ್ಲೆ ಮತ್ತು ಏನನ್ನು ಬೇಕಾದರೂ ಜಯಿಸಬಲ್ಲೆ ಎಂಬ ದುರಹಂಕಾರದ ಪಿತ್ತ ನೆತ್ತಿಗೇರುತ್ತದೆ. ಈ ಮದ ಅಥವಾ ದುರಹಂಕಾರ ದುರ್ನಡತೆಗೆ ಹಾದಿ ಮಾಡಿಕೊಡುತ್ತದೆ.

ಕಾಮ ಎಂದರೆ ಬಯಕೆಗಳು ಎಂದು ಹೇಳಲಾಗುತ್ತದೆ. ಬಯಕೆ ಆಸೆಯ ಮತ್ತು ದುರಾಸೆಯ ಪ್ರತಿರೂಪ ಆಗಿರುತ್ತದೆ. ಆಸೆಯು ಇರಬೇಕು. ಆಸೆಯಿಂದಾಗಿ ಸ್ಪೂರ್ತಿಯುತ ಬದುಕು ಇರುತ್ತದೆ. ದುರಾಸೆ ಇದಕ್ಕೆ ತದ್ವಿರುದ್ಧವಾಗಿರುತ್ತದೆ. ಅತಿಯಾದ ಹಣ ಮತ್ತು ಮದದಿಂದ ಮನುಷ್ಯನಿಗೆ ಕಾಡುವ ಮತ್ತೊಂದು ದುರ್ಗುಣವೇ ದುರಾಸೆ ಆಗಿದೆ. ದುರಾಸೆಯು ಮನುಷ್ಯನ ಎಲ್ಲ ಕೆಟ್ಟ ಬಯಕೆಗಳ ಪ್ರತೀಕ ಆಗಿದೆ.

ಈ ಮೂರು ಗುಣಗಳು ಮನುಷ್ಯನನ್ನು ಕತ್ತಲಕೂಪಕ್ಕೆ ಕರೆದೊಯ್ಯುತ್ತದೆ. ಇಂತಹವರಿಗೆ ಯಾವ ಧರ್ಮಶಾಸ್ತ್ರ ವಿವೇಕ ರೀತಿ-ನೀತಿಗಳು ಯಾವುದಕ್ಕೂ ಇವರು ಕಿವಿ ಕೊಡುವುದಿಲ್ಲ. ಬೇಕಾದರೆ ಇಂತಹ ವಿಷಯಗಳ ಬಗ್ಗೆ ಅವರು ಭರ್ಜರಿ ಉಪನ್ಯಾಸ ಉಪದೇಶ ಕೊಡಬಲ್ಲರು. ಒಂದು ರೀತಿಯಲ್ಲಿ ಆಡಂಬರ ಯುತ ಬದುಕು ಆಗುತ್ತದೆ. ಹಚ್ಚಿದ ಬೆಳಕಿನ ದೀಪವನ್ನು ಈ ಗುಣಗಳು ಆರಿಸಿ ಬಿಡುತ್ತದೆ.

ಹಿರಿಯರು ಹೇಳಿದಂತೆ ಮನುಷ್ಯನ ಮನಸ್ಸು ಮರ್ಕಟದಂತೆ ಇದೆ. ಮರ್ಕಟ ಎಂದರೆ ಮಂಗ. ಮಂಗನ ಮನಸ್ಸು ಯಾವತ್ತೂ ಸ್ಥಿರವಾಗಿರುವುದಿಲ್ಲ. ಅದಕ್ಕೆ ಯಾರಾದರೂ ಹೆಂಡ ಕೊಡಿಸಿ ಬಿಟ್ಟರೆ ಅದನ್ನು ಹಿಡಿಯುವುದನ್ನು ಯಾರಿಗೂ ಆಗುವುದಿಲ್ಲ.

ಮಂಗನ ಮನಸ್ಸಿನಂತೆ ಅಸ್ಥಿರತೆಯ ಮನಸ್ಸು ಮಾನವನದು ಆಗಿದೆ. ಇಂತಹ ದುರ್ಬಲ ಮಾನವನಿಗೆ ಅತಿಯಾದ ಸಂಪತ್ತು ಮದ ಕಾಮ ಎಂಬ ಮಿಶ್ರಿತ ಹೆಂಡ ಸೇವಿಸಿದರೆ ಕೇವಲ ಆ ಮನುಷ್ಯ ಮಾತ್ರ ಅಲ್ಲ ಆತನ ಕುಟುಂಬ ಸಮಾಜ ಎಲ್ಲರೂ ಎಲ್ಲಾ ಕ್ಷೇತ್ರದಲ್ಲೂ ಸರ್ವನಾಶ ಖಂಡಿತ ಆಗುತ್ತದೆ.

ಮೇಲೆ ಹೇಳಿದ ಈ ಮೂರು ಗುಣಗಳು ಕೇವಲ ವೈಯಕ್ತಿಕವಾಗಿ ವ್ಯಕ್ತಿಗಳಲ್ಲಿ ಮಾತ್ರ ಇಲ್ಲ ವ್ಯಕ್ತಿ ಪ್ರತಿನಿಧಿಸುವ ಕುಟುಂಬ ಸಮಾಜಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಅಂದರೆ ಸಾಮಾಜಿಕ ಶೈಕ್ಷಣಿಕ ರಾಜಕೀಯ ಹರಡಿದೆ. ಬೇರೆ ಯಾವುದೇ ಕ್ಷೇತ್ರದಲ್ಲಿ ಇದ್ದರು ಅದನ್ನು ತಿದ್ದುವುದಕ್ಕೆ ಗುರುಹಿರಿಯರು ಹಾಗೂ ದಾರ್ಶನಿಕರು ಪ್ರತಿಯೊಂದು ಸಮಾಜದಲ್ಲಿ ಕುಟುಂಬದಲ್ಲಿ ಇದ್ದೇ ಇರುತ್ತಾರೆ. ಹಾಗಾಗಿ ಅಂತಹ ಕ್ಷೇತ್ರಗಳು ಸ್ವಲ್ಪಮಟ್ಟಿಗೆ ದಾರಿ ತಪ್ಪಿದರು ಕಾಲಾನಂತರದಲ್ಲಿ ಸರಿದಾರಿಗೆ ಬರುತ್ತದೆ. ಆದರೆ ರಾಜನೀತಿಗೆ ಮಾತ್ರ ಇದು ಅನ್ವಯ ಆಗುತ್ತಿಲ್ಲ.

ರಾಜಕೀಯ ನೀತಿ ಎಂದರೆ ಮರ್ಕಟಕ್ಕೆ ಹೆಂಡ ಕುಡಿಸಿದ ಸ್ಥಿತಿಯೇ ಆಗುತ್ತದೆ. ಏಕೆಂದರೆ ರಾಜಕಾರಣದ ಕ್ಷೇತ್ರದಲ್ಲಿ ಅತಿಯಾದ ಐಶ್ವರ್ಯ ಮತ್ತು ಸರ್ವಾಧಿಕಾರ ದುರಹಂಕಾರದ ಮದ ಕೊನೆಗೆ ಕಾಮದ ರುದ್ರತಾಂಡವ ಎಲ್ಲವೂ ಬೇಕೆನಿಸಿದ ಕ್ಕಿಂತ ಜಾಸ್ತಿ ಇದೆ. ಇಂತಹ ಸಮಯದಲ್ಲಿ ಧರ್ಮ-ಅಧರ್ಮ ನೀತಿ ಅನಿತಿ ನ್ಯಾಯ ಅನ್ಯಾಯ ಇವುಗಳ ಯಾವುದರ ಪರಿವೆಯೂ ರಾಜಕೀಯ ಕ್ಷೇತ್ರವನ್ನು ಕಾಡುವುದಿಲ್ಲ. ಇಂತಹ ಸಂದರ್ಭದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಎಲ್ಲೆಲ್ಲೂ ದುರಾಡಳಿತ ಸ್ವಜನಪಕ್ಷಪಾತ ದುರ್ನಡತೆ ಅರಾಜಕತೆ ವಿಜೃಂಭಿಸುತ್ತದೆ .

ಇದರ ಜೊತೆಗೆ ಮತ್ತೊಂದು ಬೌದ್ಧಿಕ ದಿವಾಳಿತನ ಸೇರಿ ಕೊಂಡರೆ ಮುಗಿದೇಹೋಯಿತು. ಎಲ್ಲೆಡೆಯೂ ಸರ್ವನಾಶ ಕಟ್ಟಿಟ್ಟಬುತ್ತಿ ಆಗುತ್ತದೆ. ಎಲ್ಲೆಡೆಯೂ ಎಲ್ಲರಲ್ಲಿಯೂ ಹಾಹಾಕಾರ ಉಂಟಾಗುತ್ತದೆ. ಸಮಾಜದಲ್ಲಿನ ವೈಚಾರಿಕತೆಯ ಕ್ಷೋಭೆ ಸರ್ವನಾಶ ಉಂಟುಮಾಡುತ್ತದೆ. ಏಕೆಂದರೆ ಸಮಾಜದ ಯಾವುದೇ ಕ್ಷೇತ್ರದಲ್ಲಿ ಕುಂದು ಕೊರತೆ ಉಂಟಾದರೂ ಪರವಾಗಿಲ್ಲ ವಿಚಾರಶೀಲತೆ ವೈಚಾರಿಕ ಬುದ್ಧಿಮತ್ತೆಗೆ ತುಕ್ಕು ಹಿಡಿಯಬಾರದು. ಇದು ಬಂದರೆ ಮನುಷ್ಯನಿಗೂ ಪ್ರಾಣಿಗ ಜೀವನಕ್ಕೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಪ್ರಾಣಿಗಳಿಗಿಂತ ಮನುಷ್ಯ ಭಿನ್ನ ಎಂದು ಸ್ಪಷ್ಟವಾಗಿ ತೋರ್ಪಡಿಸುವುದು ಮನುಷ್ಯನಿಗಿರುವ ಬುದ್ಧಿಶಕ್ತಿಯಿಂದ ಎಂಬುದು ಸರ್ವೇಸಾಮಾನ್ಯವಾದ ವೈಜ್ಞಾನಿಕ ವಿಶ್ಲೇಷಣೆ ಆಗಿದೆ. ಶ್ರೀಮದ್ಭಾಗವತ ಗ್ರಂಥದಲ್ಲಿಯೂ ಶುಕಮುನಿಗಳು ಪರೀಕ್ಷಿತ ರಾಜನಿಗೆ ಮನುಷ್ಯ ಮತ್ತು ಪ್ರಾಣಿಗಳ ವ್ಯತ್ಯಾಸದ ಬಗ್ಗೆ ವಿಶ್ಲೇಷಣಾತ್ಮಕ ವಿಚಾರ ಹೇಳಿದ್ದಾರೆ.

ಹಾಗಾಗಿ ವೈಚಾರಿಕತೆಗೆ ತುಕ್ಕು ಹಿಡಿದಾಗ ಇಂತಹ ಸಂದರ್ಭದಲ್ಲಿ ಸಾತ್ವಿಕರ ಬದುಕು ಮೂರಾಬಟ್ಟೆ ಅವರು ಸಾಮಾನ್ಯ ಜನಜೀವನ ನಡೆಸುವುದಕ್ಕೂ ತೊಂದರೆ ನಿರ್ಬಂಧ ಉಂಟಾಗುತ್ತದೆ. ಈ ಸಮಾಜದ ವ್ಯವಸ್ಥೆಯೇ ಕುಸಿದು ಬಿದ್ದು ಹೋಗುತ್ತದೆ. ಸಾಂಸ್ಕೃತಿಕ ಪರಂಪರೆಗೆ ಧಕ್ಕೆ ಉಂಟುಮಾಡುತ್ತದೆ. ಸಾಂಸ್ಕೃತಿಕ ಅಧಃಪತನ ವು ಬದುಕನ್ನು ಹಿಂಡಿ ಹಿಪ್ಪೆ ಮಾಡುತ್ತದೆ.

ಇಂತಹ ಸಂದರ್ಭಗಳು ನಮ್ಮ ಸಮಾಜದಲ್ಲಿ ಮತ್ತು ದೇಶದಲ್ಲಿ ಅನೇಕ ಸಂದರ್ಭಗಳಲ್ಲಿ ಐತಿಹಾಸಿಕವಾಗಿ ಧಾರ್ಮಿಕವಾಗಿ ಪುರಾಣ ಕೃತಿಗಳಲ್ಲಿ ಬಂದಿರುವುದು ನಾವು ನೋಡಬಹುದು ಮತ್ತು ಕಾಣಬಹುದು. ಭಗವಂತನ ನಾಮ ನಿಷೇಧಿಸಿದ ಹಿರಣ್ಯಕಶಿಪುವು ಪುರಾಣ ಆಗಲಿ ರಾಮಾಯಣ ಮಹಾಭಾರತ ಗ್ರಂಥಗಳಲ್ಲಿ ಇಂತಹ ಅನೇಕ ಪರಿಸ್ಥಿತಿಗಳನ್ನು ಸಾತ್ವಿಕರು ಎದುರಿಸುತ್ತಾರೆ ಆ ಸಂದರ್ಭಕ್ಕೆ ತಕ್ಕಂತೆ ಕೆಲವೊಮ್ಮೆ ಸಾತ್ವಿಕ ರಿಗೆ ಸೋಲು ಸಹ ಉಂಟಾಗುತ್ತದೆ. ಇದು ಸಹಜವೂ ಆಗಿರುತ್ತದೆ. ಆದರೆ ಹಾಗೆ ಉಂಟಾದ ಸೋಲಿನಿಂದ ಅವರೆಂದೂ ವಿಚಲಿತರಾಗುವುದಿಲ್ಲ. ಅವರು ಎಂತಹ ಸಂದರ್ಭವೇ ಬರಲಿ ಧರ್ಮದ ರೀತಿ-ರಿವಾಜುಗಳನ್ನು ಯಾವತ್ತೂ ಕೈ ಬಿಡುವುದಿಲ್ಲ . ತಾಳ್ಮೆಯಿಂದಲೇ ಕಾಯುತ್ತಾರೆ. ಕಡೆಯಲ್ಲಿ ಗೆಲುವನ್ನು ಸಾಧಿಸುತ್ತಾರೆ. ಏಕೆಂದರೆ ಧರ್ಮೋ ರಕ್ಷಿತಿ ರಕ್ಷಿತಹ ಇದು ಅವರ ಜೀವನದ ಧ್ಯೇಯ ವಾಕ್ಯ ಆಗಿರುತ್ತದೆ. ಮತ್ತೊಂದು ಉದಾಹರಣೆ ತೆಗೆದುಕೊಳ್ಳಬೇಕಾದರೆ ಅಂದಿನ ಕಾಲಕ್ಕೆ ಧೃತರಾಷ್ಟ್ರನ ಪುತ್ರ ದುರ್ಯೋಧನ ಮತ್ತು ಆತನ ಗುಂಪಿಗೆ ಅತಿಯಾದ ಐಶ್ವರ್ಯ ಸರ್ವಾಧಿಕಾರ ಮದ ಮತ್ತು ಕಾಮಾದಿ ಬಯಕೆಗಳು ತುಂಬಿ ತುಳುಕುತ್ತಿದ್ದವು. ಇದರ ದುಷ್ಪರಿಣಾಮವಾಗಿ ಪಾಂಡವರು ದಾಸ್ಯಕ್ಕೆ ಒಳಗಾದರು. ನಂತರ ನಡೆದ ದ್ರೌಪತಿ ವಸ್ತ್ರಾಭರಣ ಪ್ರಸಂಗ ದಿಂದಲೂ ಸಾತ್ವಿಕ ರಿಗೆ ಮೊದಲು ಉಂಟಾದ ಸೋಲು ನಂತರ ಅವರ ಧರ್ಮ ನಿಷ್ಠೆ ಮತ್ತು ತಾಳ್ಮೆಯ ಸ್ವಭಾವದಿಂದ ನಂತರದ ದಿನಗಳಲ್ಲಿ ಭಗವಂತನ ಸಹಾಯದಿಂದ ರಾಜ್ಯವನ್ನು ನ್ಯಾಯವನ್ನು ಪಡೆದುಕೊಳ್ಳುತ್ತಾರೆ. ಸಾತ್ವಿಕರು ಸೋಲನ್ನೇ ಗೆಲುವಿನ ಮೆಟ್ಟಿಲು ಎಂದು ತಿಳಿದು ಕಡೆಯಲ್ಲಿ ವಿಜಯ ಸಂಪಾದಿಸುತ್ತಾರೆ.

ಆದ್ದರಿಂದ ನಾವು ಸಹ ಕಷ್ಟಗಳಿಗೆ ಎದೆಗುಂದದೆ ಗಾಡಾಂಧಕಾರ ಕವಿದಾಗ ಕತ್ತಲು ಕತ್ತಲು ಎಂದು ಕೂಗಿಕೊಂಡರೆ ಬೆಳಕು ಆಗುವುದಿಲ್ಲ. ಯಾರಾದರೂ ಒಬ್ಬರು ಬೆಳಕಿನ ದೀಪ ಹಚ್ಚಲಿಬೇಕು.ಆಗ ಕತ್ತಲು ಹೋಗುತ್ತದೆ. ಮಂಜು ಮುಸುಕಿದ ಮೋಡದಂತೆ ಕಷ್ಟಗಳು ಬರುತ್ತವೆ. ಅದನ್ನು ಎದುರಿಸಲೇಬೇಕು ಹಿಮ್ಮೆಟ್ಟಿಸಬೇಕು ಅದು ಬಿಟ್ಟು ಬೇರೆ ಮಾರ್ಗ ಖಂಡಿತ ಇಲ್ಲ.

ಶ್ರೀಕೃಷ್ಣಾರ್ಪಣಮಸ್ತು.

ಕುರುಡು ಕಾಂಚಾಣ ಕುಣಿಯುತಲಿತ್ತು, ಕಾಲಿಗೆ ಬಿದ್ದವರ ತುಳಿಯುತಲಿತ್ತೋ !!!ಮಾನವನು ವಿಜ್ಞಾನ-ತಂತ್ರಜ್ಞಾನದ ಆಸರೆಯಲ್ಲಿ ಅಭಿವೃದ್ಧಿಯ ಉತ್ತುಂಗದಲ್...
17/07/2020

ಕುರುಡು ಕಾಂಚಾಣ ಕುಣಿಯುತಲಿತ್ತು, ಕಾಲಿಗೆ ಬಿದ್ದವರ ತುಳಿಯುತಲಿತ್ತೋ !!!
ಮಾನವನು ವಿಜ್ಞಾನ-ತಂತ್ರಜ್ಞಾನದ ಆಸರೆಯಲ್ಲಿ ಅಭಿವೃದ್ಧಿಯ ಉತ್ತುಂಗದಲ್ಲಿದ್ದರೂ, ತನ್ನ ಮನಸ್ಸನ್ನು ಅರ್ಥೈಸಿಕೊಳ್ಳುವಲ್ಲಿ ಮತ್ತು ನಿಯಂತ್ರಿಸುವಲ್ಲಿ ಸೋತು ಹೋಗಿದ್ದಾನೆ. ಬಿಡುವಿಲ್ಲದ ಲೌಕಿಕ ವ್ಯವಹಾರದಲ್ಲಿ ವ್ಯಸ್ತನಾಗುವ ಮೂಲಕ ಯಂತ್ರವೇ ಆಗಿಬಿಟ್ಟಿದ್ದಾನೆ. ಹಲವು ವರುಷಗಳ ಕಾಲ ನಿರಂತರವಾದ ದುಡಿಮೆಯನ್ನು ಮಾಡಿದರೂ ಆತನ ವ್ಯಕ್ತಿತ್ವವು ಪರಿಪಕ್ವವಾಗುವುದಿಲ್ಲ. ಸುಖ-ಸೌಲಭ್ಯಗಳು,ಧನ-ಕನಕಾದಿಗಳು ಹೇರಳವಾಗಿ ಸಂಗ್ರಹವಾಗುತ್ತದೆ. ಆದರೆ ಮನಸ್ಸು ಸದಾ ಅಸಹನೆಯಿಂದ ,ಖಿನ್ನತೆಯಿಂದ ಚಡಪಡಿಸುತ್ತಿರುತ್ತದೆ. ಹೀಗಿರುವಾಗ ಇಂದಿನ ವಾಸ್ತವ ಅಭಿವೃದ್ಧಿ - ಊರ್ಧ್ವಮುಖವೋ? ಅಧೋಮುಖವೋ?
ರಸ್ತೆಗಳು ವಿಶಾಲವಾಗಿವೆ, ಆದರೆ ದೃಷ್ಟಿಕೋನ ಸಂಕುಚಿತವಾಗಿವೆ!
ನಾವು ಹೆಚ್ಚು ಖರೀದಿಸುತ್ತೇವೆ, ಆದರೆ ಕಡಿಮೆ ಉಪಯೋಗಿಸುತ್ತೇವೆ!
ನಮ್ಮ ಮನೆಗಳು ದೊಡ್ಡದಾಗುತ್ತಿವೆ, ಆದರೆ ಕುಟುಂಬ ಚಿಕ್ಕದಾಗಿರುತ್ತದೆ !
ಅನುಕೂಲಗಳು ಹೆಚ್ಚಿವೆ, ಆದರೆ ಅನುಭವಿಸಲು ಸಮಯವೇ ಇಲ್ಲ!
ಅಸಾಮಾನ್ಯ ವಿದ್ಯಾರ್ಹತೆಗಳಿವೆ,ಆದರೆ ಸಾಮಾನ್ಯ ಜ್ಙಾನ ಕಡಿಮೆಯಾಗಿದೆ!
ವಿಷಯ ಸಂಗ್ರಹ ಹೆಚ್ಚಾಗಿದೆ, ಆದರೆ ವಿವೇಚನೆ ಕಡಿಮೆಯಾಗಿದೆ!
ಪರಿಣತರು ಹೆಚ್ಚಿದ್ದಾರೆ, ಸಮಸ್ಯೆಗಳು ಹೆಚ್ಚಿವೆ!
ಔಷಧಿಗಳು ಹೆಚ್ಚಿವೆ, ಆರೋಗ್ಯ ಕಡಿಮೆಯಾಗಿದೆ!
ನಾವು ಹೆಚ್ಚು ಗಳಿಸುತ್ತೇವೆ, ಆದರೂ ನೆಮ್ಮದಿಯಿಂದ ಜೀವಿಸುತ್ತಿಲ್ಲ.
ತುಂಬ ವೇಗವಾಗಿ ಹೋಗುತ್ತೇವೆ,ತುಂಬ ಬೇಗ ಕೋಪಿಸಿಕೊಳ್ಳುತ್ತೇವೆ!
ರಾತ್ರಿ ತುಂಬ ಹೊತ್ತು ಎದ್ದಿರುತ್ತೇವೆ, ಬೆಳಿಗ್ಗೆ ತುಂಬ ಬಳಲುತ್ತೇವೆ
ಕಡಿಮೆ ಓದುತ್ತೇವೆ, ತುಂಬ ಟೀವಿ ನೋಡುತ್ತೇವೆ:
ತೋರಿಕೆಯ ಭಕ್ತಿ ಜಾಸ್ತಿ, ಪರಿಶುದ್ಧ ಮನದ ಪ್ರಾರ್ಥನೆ ಕಡಿಮೆ
ನಮ್ಮ ಆಸ್ತಿ ಪಾಸ್ತಿಗಳ ಬೆಲೆ ಏರಿದೆ,ಆದರೆ ನಮ್ಮ ಮೌಲ್ಯಗಳು ಕುಸಿದಿವೆ!
ತುಂಬಾ ಹೆಚ್ಚು ಮಾತನಾಡುತ್ತೇವೆ,ತುಂಬ ಕಡಿಮೆ ಪ್ರೀತಿಸುತ್ತೇವೆ ಜೊತೆಗೆ ತುಂಬ ಸುಳ್ಳು ಹೇಳುತ್ತೇವೆ!
ನಮ್ಮ ಜೀವನಕ್ಕೆ ವರ್ಷಗಳನ್ನು ತುಂಬುತ್ತೇವೆ, ಆದರೆ ವರ್ಷಗಳಿಗೆ ಜೀವ ತುಂಬುವುದಿಲ್ಲ!
ನಾವು ಚಂದ್ರಲೋಕವನ್ನು ಮುಟ್ಟಿ ಬಂದಿದ್ದೇವೆ, ಆದರೆ ನಮ್ಮ ಕಾಂಪೌಂಡ ದಾಟಿ ನೆರೆಯವರನ್ನು ಭೇಟಿಯಾಗಲು ಹೋಗುವುದಿಲ್ಲ.
ನಾವು ಬಹಿರಂಗದಲ್ಲಿ ಗೆದ್ದವರಂತೆ ಅಂದುಕೊಳ್ಳುತ್ತೇವೆ, ಆದರೆ ಅಂತರಂಗದಲ್ಲಿ ಸೋಲುತ್ತಿದ್ದೇವೆ!
ಗಾಳಿಯನ್ನು ಶುದ್ಧಿಗೊಳಿಸಲು ಹೆಣಗುತ್ತೇವೆ, ಆದರೆ ನಮ್ಮ ಆತ್ಮ ಮಲೀನಗೊಂಡಿದ್ದು ನಮಗೆ ಗೋಚರವಾಗುವುದಿಲ್ಲ.
ಬರವಣಿಗೆ ಹೆಚ್ಚಾಗಿದೆ, ಆದರೆ ಅರಿವು ಕಡಿಮೆಯಾಗಿದೆ!
ಹೆಚ್ಚು ಆಲೋಚಿಸುತ್ತೇವೆ, ಆದರೆ ಕಡಿಮೆ ಸಾಧಿಸುತ್ತೇವೆ!
ನಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದೆ,ಆದರೆ ನೈತಿಕತೆ ಕುಸಿದಿದೆ!
ಇದು ವಿವಿಧ ಭಕ್ಷಗಳ ಕಾಲ, ಆದರೆ ಕಡಿಮೆ ಜೀರ್ಣಶಕ್ತಿಯ ಕಾಲ
ಎತ್ತರದ ನಿಲುವು ಠೀವಿ, ಆದರೆ ಕುಬ್ಜ ವ್ಯಕ್ತಿತ್ವ
ವಿಶ್ವಶಾಂತಿಯ ಬಗ್ಗೆ ಮಾತನ್ನಾಡುತ್ತೇವೆ, ಆದರೆ ಮನೆಯಲ್ಲಿ ಕಾದಾಡುತ್ತೇವೆ!
ಗಂಡ ಹೆಂಡಿರ ದುಡಿಮೆ ಹೆಚ್ಚಾಗಿದೆ, ಆದರೆ ಸಂಬಂಧಗಳು ಛಿದ್ರಗೊಂಡು ವಿಚ್ಛೇದನಗಳು ಹೆಚ್ಚಾಗಿವೆ!
ಅದ್ಬುತ ವಿನ್ಯಾಸದ ನಿವಾಸಗಳಿವೆ,ಆದರೆ ಮನಶ್ಯಾಂತಿ ಮುರಿದುಬಿದ್ದಿದೆ.

ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)

17/07/2020

ಸಣ್ಣ ಸಣ್ಣ ಖುಷಿ ಅನುಭವಿಸುತ್ತಾ ಬದುಕಬೇಕು !
ಅಡುಗೆಗೆ ಉಪ್ಪು ಹೆಚ್ಚಾದರೆ ಒಂದು ಆಲೂಗಡ್ಡೆ ಮುಳುಗಿಸಬೇಕಂತೆ..ಅದು ಉಪ್ಪನ್ನು ಹೀರ್ಕೊಳುತ್ತೆ .ನಮಗೂ ಹೀಗೊಬ್ಬ ಆಪತ್ಭಾಂಧವ ಇದ್ದಿದ್ರೆ ಚೆನ್ನಾಗಿರೋದಲ್ವಾ ...ಸಾಲದ ಹೊರೆಯೇರಿದಾಗ ತೀರ್ಸೋಕೆ.
ಈರುಳ್ಳಿ ಕತ್ತರಿಸಿ ನೀರಲ್ಹಾಕಿ ಹೆಚ್ಚಿದರೆ ಕಣ್ಣೀರು ಬರಲ್ಲ..ದುಃಖದಿಂದ ಕಣ್ಣೀರು ಬಂದಾಗ ,ನೀರು ಕುಡಿದು ಜೋರಾಗಿ ನಕ್ಕರೆ ಕಣ್ಣೀರು ಕಾಣೋಲ್ಲ
ಎಷ್ಟೊತ್ತಾದರೂ ಕುಕ್ಕರ್ ಕೂಗ್ತಾ ಇಲ್ಲ ಅಂದ್ರೆ ಒಳಗೆ ತಳ ಹಿಡೀತಿದೆ ಅಂತ ಅರ್ಥ; ಏನ್ ಕೇಳಿದ್ರೂ ಹೆಂಡ್ತಿ ಮೌನವಾಗಿದಾಳೆ ಅಂದ್ರೆ ಒಳಗೆ ಉರೀತಿದೆ ಅಂತ ಅರ್ಥ.
ಬೇಳೆ ಬೇಯೋಕೆ ಚಿಟಿಕೆ ಅರಿಶಿನ,ಮಿಳ್ಳೆ ಎಣ್ಣೆ ಸಹಕಾರಿ ... ಬದುಕು ಅಂದಗಾಣಿಸೋಕೆ ಹಿಡಿಯಷ್ಟು ಪ್ರೀತಿ ,ಮುಷ್ಟಿಯಷ್ಟು ಕಾಳಜಿ ಸಹಕಾರಿ..
ಹಿಟ್ಟು ಚೆನ್ನಾಗಿ ನಾದಿದರೆ ಜೋಳದ ರೊಟ್ಟಿ ಹರಿಯೋಲ್ಲ ಹೇಗೆ ತಟ್ಟಿದರೂ; ಸಂಬಂಧಗಳೂ ಹಾಗೇನೆ , ನಾದಿ ಹದವಾಗಿದ್ದರೆ ತಟ್ಟಿದರೂ ,ಲಟ್ಟಿಸಿದರೂ, ಬಿಸಿಮೇಲೆ ಬೇಯಿಸಿದರೂ ಹರಿಯೋಲ್ಲ .
ಹಲಸಂದೆ ,ಹುರುಳಿ, ಹೆಸರಿನಂತಹ ಕಾಳುಗಳನ್ನು ನೀರಿಗೆ ಹಾಕಿದಾಗ ಜೊಳ್ಳು ತೇಲುತ್ತದೆ ...ಗೆಳೆಯರೂ ಹಾಗೇ ಅಲ್ವಾ, ನಾವು ತಾಪತ್ರಯದ ನೀರಿಗೆ ಬಿದ್ದಾಗ ಜೊಳ್ಯಾರು ,ಗಟ್ಟಿ ಯಾರು ಅಂತ ಗೊತ್ತಾಗತ್ತೆ
ಕಾಫಿ ಬಟ್ಟಲು ಖಾಲಿಯಾಗಿ ಕೊನೇಲಿ ಉಳಿಯೋ ಕಾಫಿ ಬಸಿಯೋಕೆ ತುಂಬ ರುಚಿ .ಗಳಿಸಿದ್ದ ಗೆಳೆತನ,ಪ್ರೀತಿ, ಆಸ್ತಿ ನೂ ಹಾಗೇ ಕಳ್ದೋಗುತ್ತೆ ಅನ್ನೋವಾಗ ನಂಟಿನ ಅಂಟು ಜಾಸ್ತಿಯಾಗುತ್ತೆ ..
ಅಗ್ಗಿಷ್ಟಿಕೇಲಿ ಅಡುಗೆ ಮಾಡೋವಾಗ ಪಾತ್ರೆ ತಳಕ್ಕೆ ಬೂದೀನೋ ಅಕ್ಕಿಹಿಟ್ಟೋ ಹಚ್ತೀವಿ ಪಾತ್ರೆ ಮಸಿ ಹಿಡೀದಿರ್ಲಿ ಅಂತ ... ಅನವಶ್ಯಕ ನಿಂದನೆಗಳಿಗೂ ಹಾಗೇ, ನಿರ್ಲಕ್ಷ್ಯ ದ ಕೋಟಿಂಗ್ ಮಾಡಿಬಿಡಬೇಕು ..ನೋವು ಅಂಟೋಲ್ಲ, ಅಂಟಿದರೂ ಕೊಡವಿದರೆ ಉದುರಿಹೋಗುತ್ತೆ..
ಸಾರು ಹುಳೀ ಕುದ್ಯೋವಾಗ ಚೂರು ಬೆಲ್ಲ ಹಾಕ್ತೀವಿ ಘಾಟು ಹೋಗೋಕೆ .. ದಾಂಪತ್ಯದಲ್ಲೂ ತುಸು ಸೈರಣೆ ಬೆರೆಸಿ ,ಕಲಹದ ಘಾಟು ತಡ್ಯೋಕೆ ...
ಹಾಲು ಒಡೆದರೆ ಸಂಸ್ಕರಿಸಿ ಖೋವಾನೋ ಪನೀರನ್ನೋ ಮಾಡಬಹುದು.. ಸಂಬಂಧ ಒಡೆದರೆ ಹೀಗ್ಮಾಡೋಕಾಗೋಲ್ಲ...ಜೋಪಾನ
ಕಾದ ಎಣ್ಣೆಗೆ ಸಣ್ಣ ಹನಿ ಸಿಡಿದ್ರೂ ಚಟಪಟ ಚಟಪಟ ಅಂತ ಬೈಯುತ್ತೆ... ನೊಂದ ಮನಸ್ಸೂ ಹಾಗೇನೆ ಸಣ್ಣ ಸಣ್ಣ ಮಾತಿಗೆಲ್ಲ ಸಿಡಿದೇಳತ್ತೆ ..
ಮಾಡಿಟ್ಟ ಅಡುಗೇಲಿ ಪದೇ ಪದೇ ಕೈಯಾಡಿಸ್ತಾ ಇದ್ರೆ ,ಬೇಗ ಹಳಸೋಗತ್ತೆ... ಹಳೇ ವಿಚಾರಗಳನ್ನು ಪದೇ ಪದೇ ಕೆದಕ್ತಾ ಇದ್ರೂ ಅಷ್ಟೇ, ಸಂಬಂಧ ಹಳಸುತ್ತೆ ...
ಫ್ರಿಡ್ಜಲ್ಲಿಟ್ಟ ಹಲಸಿನ ತೊಳೆ, ಅಲ್ಲಿರೋ ಎಲ್ಲ ವಸ್ತುವಿನೊಳಗೂ ತನ್ನ ಸುವಾಸನೆ ಸೇರಿಸಿಬಿಡುತ್ತೆ. ಸಹೃದಯರೂ ಹಾಗೇ ಅಲ್ವಾ, ತಾವಿರೋ ತಾವಿನಲ್ಲೆಲ್ಲ ಸಜ್ಜನಿಕೆ ಹರಡ್ತಾರೆ..
ಸಿಹಿ ತಿಂಡಿ ಮಧುಮೇಹ ಹೆಚ್ಚು ಮಾಡುತ್ತೆ ಕಹಿ ಹಾಗಲ,ಮೆಂತ್ಯ, ಅಮೃತ ಬಳ್ಳಿ ಈ ರೋಗಕ್ಕೆ ಔಷಧಿಯಂತೆ .. ಕೆಲವರ ಮಾತುಗಳೂ ಹಾಗೇನೇ,ಸಿಹಿಯಲ್ಲಿ ಕುಟಿಲ ,ಕಹಿಯಲ್ಲಿ ಕಾಳಜಿ....
ಮೊಸರನ್ನ ಉಪ್ಪಿನ ಕಾಯಿ , ಊಟ ಮುಗಿಸಿ ತಟ್ಟೆ ಬಳಿದು ಕೈ ಬೆರಳುಗಳನ್ನು ಸಂಕೋಚವಿಲ್ಲದೇ ನೆಕ್ಕಬೇಕು.. ಬದುಕನ್ನೂ ಹಾಗೇ ,ಸಣ್ಣ ಸಣ್ಣ ಖುಷಿ ಅನುಭವಿಸುತ್ತಾ ಬದುಕಬೇಕು .

ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)

Address

Gottigere
Bangalore
560083

Telephone

+919481190055

Website

Alerts

Be the first to know and let us send you an email when SDP Caterer's, Bangalore posts news and promotions. Your email address will not be used for any other purpose, and you can unsubscribe at any time.

Contact The Business

Send a message to SDP Caterer's, Bangalore:

Share

Category