11/04/2021
2011 ರಿಂದ ಅಂದ್ರೆ 10 ವರ್ಷಗಳಿಂದ ಮೈಸೂರಿನ ಶಾಂತಿನಗರದ ಪುಟ್ಟದೊಂದು ಜಾಗದಲ್ಲಿ ಸಾವಿರಗಟ್ಟಲೆ ಪುಸ್ತಕಗಳನ್ನು ಸಂಗ್ರಹಿಸಿ, ಓದುವ ಆಸಕ್ತಿಯುಳ್ಳವರಿಗೆ ಒದಗಿಸಿ ಕೊಟ್ಟು, ಅಕ್ಷರ ಪ್ರೇಮವನ್ನು, ಕನ್ನಡ ಪ್ರೇಮವನ್ನು ಮೆರೆಯುತ್ತಿರುವ ಸೈಯದ್ ಇಸಾಕ್ ಅವರು ಹುಟ್ಟುಹಾಕಿದ್ದ ಸಾರ್ವಜನಿಕ ಗ್ರಂಥಾಲಯ ಸುಟ್ಟು ಕರಕಲಾಗಿದೆ. ಯಾರೋ ವಿಕೃತ ಮನಸ್ಸಿನವರು ಬೆಂಕಿ ಇಟ್ಟಿದ್ದಾರೆ. ಈ ಕೆಲಸ ಮಾಡಿದವರನ್ನೂ ದೇವರು ಚೆನ್ನಾಗಿಟ್ಟಿರಲಿ ಎನ್ನುವುದು ಸೈಯದ್ ಅವರ ಹೃದಯ ವೈಶಾಲ್ಯತೆ.
ಪುಸ್ತಕಗಳಿಗೆ ಬೆಂಕಿ ಇಟ್ಟವರು ಸೈಯದ್ ಅವರ, ನಮ್ಮ ನಿಮ್ಮೆಲ್ಲರ ಅಕ್ಷರ ಪ್ರೇಮಕ್ಕೆ ಕೊಳ್ಳಿಯಿಡಲು ಸಾಧ್ಯವೇ? ಖಂಡಿತಾ ಇಲ್ಲ... ಹೀಗಾಗೇ ನಾವು ನಮ್ಮೆಲ್ಲ ಸಹೃದಯ ಮಿತ್ರರೂ ಸೇರಿ ನಮ್ಮ ಕೈಲಾದಷ್ಟು ಪುಸ್ತಕಗಳನ್ನು ಒದಗಿಸಿ ಸೈಯದ್ ಅವರ ಇಷ್ಟು ವರ್ಷಗಳ ಅಭಿಲಾಷೆ ವ್ಯರ್ಥವಾಗದಂತೆ ಮಾಡಬೇಕೆಂದು ಹೊರಟಿದ್ದೇವೆ.
ಬನ್ನಿ, ನಮ್ಮೊಂದಿಗೆ ಕೈಜೋಡಿಸಿ. ಒಬ್ಬೊಬ್ಬರು ಒಂದೊಂದು ಪುಸ್ತಕವನ್ನು ಅಥವಾ ನಿಮ್ಮಿಂದಾ ದಷ್ಟು ಪುಸ್ತಕವನ್ನು ಕೊಟ್ಟರೂ ಸಾಕು. ಮತ್ತೊಂದು ಗ್ರಂಥಾಲಯ ಎದ್ದು ನಿಲ್ಲುವುದು ಕಷ್ಟವಲ್ಲ.
ನಾವೆಲ್ಲ "ರಂಗ ಮಂಚ್" ತಂಡದಿಂದ ಇದನ್ನು ಸಾಕಾರ ಗೊಳಿಸೋಣ ಅನ್ನೋ ಉದ್ದೇಶ.
ಪುಸ್ತಕ ಗಳನ್ನು ಎಲ್ಲಿ ಕಳುಹಿಸೋದು, ಯಾರ ಹತ್ತಿರ ಮಾತಾಡೋದು?
ಅನ್ನೋ ಪ್ರಶ್ನೆಗೆ..
ಉತ್ತರ. - ಈ ವಿಳಾಸಕ್ಕೆ ಪುಸ್ತಕ ಕಳುಹಿಸಿ ಕೊಡಿ.
ಮಹಿತಿ ಬೇಕಾದಲ್ಲಿ ಇವರನ್ನು ಸಂಪರ್ಕಿಸಿ!
Babu school of rhythms
No.124, swami nilaya, 4th main, 4th block, t r shamanna road, t r nagar, basavanagudi, bangalore-560028
Shiv -+91 97422 29741
Kiran - 8970750780, 8073631992
ಸಾಧ್ಯವಾದಷ್ಟು ಈ ಸಂದೇಶವನ್ನು ನಿಮ್ಮ ಕುಟುಂಬ ,ಸ್ನೇಹತರಿಗೆ ರವಾನಿಸಿ... ನಮ್ಮಿಂದಾದಷ್ಟು ಸಹಾಯ ವಾಗಲಿ.😊🙏